ಮುಖಪುಟ >> ಮಧ್ಯವರ್ತನೆ >> ಆದರ್ಶ ವಿದ್ಯಾಲಯ

ಸಂಕ್ಷಿಪ್ತ ಪರಿಚಯ

ಪ್ರೌಢ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಸೆಪ್ಟೆಂಬರ್ 2004ರಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿಯು ಸ್ಥಾಪನೆಯಾಯಿತು. ಈ ಸಮಿತಿಯು ಸೆಪ್ಟೆಂಬರ್ 2005ರ ವರದಿಯಲ್ಲಿ ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ ಪ್ರೌಢಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸಲು ಶಿಫಾರಸ್ಸು ಮಾಡಿತ್ತು.

ದಿನಾಂಕ:13-09-2007ರಂದು ನಡೆದ ಯೋಜನಾ ಆಯೋಗದ ಸಭೆಯು ಮಾದರಿ ಶಾಲೆಗಳ ಪರಿಕಲ್ಪನೆಯನ್ನು ವ್ಯಕ್ತಪಡಿಸಿತು. ಕೇಂದ್ರೀಯ ವಿದ್ಯಾಲಯಗಳಲ್ಲಿರುವ ಗುಣಮಟ್ಟಕ್ಕೆ ಅನುಗುಣವಾದ ಮೂಲಸೌಕರ್ಯ ಹಾಗೂ ಸೌಲಭ್ಯಗಳು ಇರಬೇಕಾಗಿರುತ್ತದೆ. ಶಿಕ್ಷಕ-ಮಕ್ಕಳ ಅನುಪಾತ, ಐಸಿಟಿ ಬಳಕೆ, ಸಮಗ್ರ ಶೈಕ್ಷಣಿಕ ವಾತಾವರಣ, ಸೂಕ್ತ ಪಠ್ಯಕ್ರಮ ಮತ್ತು ಫಲಿತಾಂಶಕ್ಕೆ ಒತ್ತು ನೀಡುವ ಷರತ್ತಿಗೆ ಒಳಪಟ್ಟಿರುತ್ತದೆ. ಇಂತಹ ಪ್ರತಿಯೊಂದು ಶಾಲೆಯು ಆ ಪ್ರದೇಶದ ಎಲ್ಲಾ ಶಾಲೆಗಳಲ್ಲಿ ಶ್ರೇಷ್ಟತೆಯ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.

ಗುರಿ ಮತ್ತು ಉದ್ದೇಶ

ದೃಷ್ಟಿ:

ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡುವುದರೊಂದಿಗೆ ಅವರು ಸರಿಯಾದ ಆಯ್ಕೆ ಮಾಡಿ ಉನ್ನತ ಶೈಕ್ಷಣಿಕ ಮತ್ತು ವೈಯಕ್ತಿಕ ಶ್ರೇಷ್ಟತೆಯನ್ನು ಸಾಧಿಸುವಂತೆ ಮಾಡುವುದು ಮಾದರಿ ಶಾಲೆಗಳ ದೃಷ್ಟಿಯಾಗಿದೆ

ಗುರಿ:

ಶೈಕ್ಷಣಿಕವಾಗಿ ಹಿಂದುಳಿದಿರುವ 6000 ತಾಲ್ಲೂಕುಗಳಲ್ಲಿ ತಾಲ್ಲೂಕಿಗೆ ಒಂದರಂತೆ ಪ್ರತ್ಯೇಕವಾಗಿ ಶ್ರೇಷ್ಟತೆಯ ಮಾನದಂಡವನ್ನು ಸಾಧಿಸಿರುವ ಮಾದರಿ ಶಾಲೆಯಲ್ಲಿ ಪ್ರಾರಂಭಿಸಿ ಪ್ರತಿಭಾವಂತ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಾಗಿದೆ.

ಉದ್ಧೇಶ :

  1. ಪ್ರತಿಯೊಂದು ತಾಲ್ಲೂಕಿನಲ್ಲಿ ಕನಿಷ್ಟ ಒಂದು ಅತ್ಯುತ್ತಮ ಗುಣಮಟ್ಟವುಳ್ಳ ಹಿರಿಯ ಪ್ರೌಢಶಾಲೆಯನ್ನು ಹೊಂದುವುದು.
  2. ಶೈಕ್ಷಣಿಕವಾಗಿ ಮುನ್ನಡೆಸುವ ಪಾತ್ರ ವಹಿಸುವುದು.
  3. ನವೀನ ಪಠ್ಯಕ್ರಮ ಹಾಗೂ ಶಿಕ್ಷಣ ಕಲೆಗಳನ್ನು ಅನುಷ್ಟಾನಗೊಳಿಸುವುದು.
  4. ಮೂಲ ಸೌಕರ್ಯ, ಪಠ್ಯಕ್ರಮ, ಮೌಲ್ಯಮಾಪನ ಮತ್ತು ಶಾಲೆಯ ಆಡಳಿತಗಳಲ್ಲಿ ಮಾದರಿಯಾಗಿರುವುದು.

ಮಾದರಿ ಶಾಲೆಗಳ 2016-17ನೇ ಸಾಲಿನ ಪ್ರಗತಿಯ ವಿವರಣಾ ಮಾಹಿತಿ..

ಮಾದರಿ ಶಾಲೆಗಳ ಚೌಕಟ್ಟು...

ಮಾದರಿ ಶಾಲೆಗಳ ಪಟ್ಟಿ..

2011-12ನೇ ಸಾಲಿಗೆ ಮಾದರಿ ಶಾಲೆಗಳಲ್ಲಿನ ದಾಖಲಾತಿ.

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ.
ಭಾರತ ಸರ್ಕಾರದ ಪೋರ್ಟಲ್